ಕಸ್ತೂರಿರಂಗನ್ ವರದಿ ವಿರುದ್ಧ ಕಡಬದಲ್ಲಿ ಬೃಹತ್ ಪ್ರತಿಭಟನೆ;ಕಸ್ತೂರಿ ರಂಗನ್ ವರದಿ ಅನುಷ್ಠಾನವಾದರೆ ದ.ಕ ಜಿಲ್ಲೆಯ ಮಕ್ಕಾಲು ಭಾಗ ಜನ ಬೀದಿಗೆ-ಕಿಶೋರ್ ಶಿರಾಡಿ.

ಕಡಬ: ಪಶ್ಚಿಮಘಟ್ಟ ಸೂಕ್ಷ್ಮ ವಲಯ ಘೋಷಣೆ ಕಸ್ತೂರಿ ರಂಗನ್ ವರದಿ ಆರನೇ ಕರಡು ಅಧಿಸೂಚನೆ ಹೊರಡಿಸಿರುವುದು ನಮ್ಮ ಗಮನಕ್ಕೆ ಬಂದಿದ್ದು , ಇದು ಅನುಷ್ಠಾನವಾದರೆ ದ.ಕ ಜಿಲ್ಲೆಯ ಮುಕ್ಕಾಲು ಭಾಗದ ಜನ ಬೀದಿಗೆ ಬರಬೇಕಾಗುತ್ತದೆ, ಈ ರೈತ ವಿರೋಧಿ ಜನವಿರೋಧಿ ವರದಿಯನ್ನು ಕೈಬಿಡಬೇಕು ಎಂದು ಮಲೆನಾಡು ಜನಹಿತ  ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಕಿಶೋರ್ ಶಿರಾಡಿ ಅಗ್ರಹಿಸಿದರು.

Img 20241001 Wa0017

ಅವರು ಸೊಮವಾರ ಕಡಬದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರುದ್ಧ ನಡೆದೆ ಬೃಹತ  ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

 

ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿತವಾದ ಗ್ರಾಮಗಳಲ್ಲಿ ಈಗಾಗಲೇ ಲಕ್ಷಾಂತರ ಜನರ ಕೃಷಿ ಭೂಮಿಗೆ  ನೀಡಿರುವ ಹಕ್ಕು ಪತ್ರವನ್ನು  ಕಸಿದುಕೊಳ್ಳುವ ಷಡ್ಯಂತರ ನಡೆಯುತ್ತಿದೆ. ಆ ಹಕ್ಕು ಪತ್ರಗಳು ಕಾನೂನು ಪ್ರಕಾರ ಇಲ್ಲ ಎಂದು ಹೇಳುವ ಅಧಿಕಾರಿಗಳು ಲಂಚ  ಪಡೆದು  ಹಕ್ಕು ಪತ್ರ ನೀಡಿದ್ದಾರೆ.  ಈಗ ಅದನ್ನು ರೈತರಿಗೆ ಕಾನೂನಾತ್ಮಕವಾಗಿ ಮಾಡಿಕೊಡುವುದು ನಿಮ್ಮ ಧರ್ಮವಾಗಿದೆ, ನೀವು ಮಾಡಿದ ತಪ್ಪಿಗೆ ರೈತರನ್ನು ಬಲಿ ಕೊಡಬೇಡಿ, ಈಗಾಗಲೇ ಉದ್ಧೇಶಿತ ಪ್ರದೇಶಗಳಲ್ಲಿ  ಭೂಪರಿವರ್ತನೆ,   ಕೋವಿ ಪರವಾನಗಿಗಳನ್ನು  ನಿಲ್ಲಿಸಿ ರೈತರನ್ನು ಕೀಳು ಮಟ್ಟದಲ್ಲಿ ನೋಡುತ್ತಿದ್ದೀರಿ, ರೈತಾಪಿ ಜನ ವಿದ್ಯಾವಂತ ಸುಶಿಕ್ಷಿತರಿದ್ದೇವೆ, ನಮ್ಮನ್ನು ಮೋಸ ಮಾಡಲು ನಿಮ್ಮಿಂದ ಸಾಧ್ಯವಿಲ್ಲ.    ರೈತರ ಉಳಿವಿಗೆ ನಾವು ಕಾನೂನು ರೀತಿಯಲ್ಲಿ  ಹೋರಾಟ ಮಾಡುತ್ತೇವೆ. ಪರಿಸರ ಸಂರಕ್ಷಣ ವರದಿಯನ್ನು ಕೃಷಿ ಭೂಮಿಗೆ ತೊಂದರೆಯಾದಂತೆ , ಮೂಲಭೂತ ಸೌಕರ್ಯಗಳಿಗೆ ತೊಂರರೆಯಾಗದ0ತೆ,  ಪಶ್ಚಿಮ ಘಟ್ಟಕ್ಕ ಮಾತ್ರ ಅನ್ವಯವಾಗುವ ರೀತಿಯಲ್ಲಿ ಅನುಷ್ಠಾನ ಮಾಡಬೇಕು, ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು, ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿಭಟನ ಹಮ್ಮಿಕೊಳ್ಳಲಾಗಿದೆ, ನ,12, ರಂದು ಕುಕ್ಕೇ ಸುಬ್ರಹ್ಮಣ್ಯದಲ್ಲಿ 50 ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಉಗ್ರ ಪ್ರತಿಭಟನೆ ಮಾಡಲಾಗುವುದ ಎಂದು ಕಿಶೋರ್ ಹೇಳಿದರು.

Img 20241001 Wa0021

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಮುಖ್ ದಾಮೋಧರ ಗುಂಡ್ಯ ಮಾತನಾಡಿ ಕಳೆದ ಹನ್ನೆರಡು ವರ್ಷಗಳಿಂದ  ಮಾಧವ ಗಾಡ್ಗಿಲ್ ಹಾಗೂ ಕಸ್ತೂರಿರಂಗನ್ ವರದಿ  ಘಟ್ಟ ಹಾಗೂ ಕರಾವಳಿಯ ಭಾಗದ ಜನರಿಗೆ ಶಾಪವಾಗಿ ಕಾಡುತ್ತಿವೆ, ಉದ್ದೇಶಿತ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾದರೆ ಕೇಂದ್ರದ  ವರ್ಕಿಂಗ್ ಕಮಿಟಿಯ ಅನುಮತಿ ಪಡೆದಯಬೇಕಾಗುತ್ತದೆ. ಇದನ್ನೆಲ್ಲ ಮಡಲು  ಸಾಧ್ಯವಾಗದ ರೀತಿಯಲ್ಲಿ ನೋಡಿಕೊಂಡು ರೈತರು ತಾವಾಗಿಯೇ  ಒಕ್ಕಲೆದ್ದು ಹೋಗುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.  ಬಳಿಕ ಕಡಬ ಉಪ ತಹಸೀಲ್ದಾರ್ ಶಾಯಿದುಲ್ಲಾ ಖಾನ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Img 20241001 Wa0020

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಶೆಟ್ಟಿ, ಜಿಲ್ಲಾ  ಪರಿಷತ್ ಮಾಜಿ ಸದಸ್ಯ ಸಯ್ಯದ್ ಮಿರಾ ಸಾಹೇಬ್, ಪ್ರಮುಖರಾದ ಅಚ್ಚುತ ಗುಂಡ್ಯ, ಅಶೋಕ್ ಕುಮಾರ್ ಸುಬ್ರಹ್ಮಣ್ಯ, ಹರೀಶ್ ಕಲ್ಲುಗುಂಡಿ, ಯಶೋಧರ ಕೊಣಾಜೆ, ಮೇದಪ್ಪ ಗೌಡ ಡೆಪ್ಪುಣಿ, ಸನ್ನಿ ಉದನೆ, ಗಣೇಶ್ ಅನಿಲ, ಪ್ರಸನ್ನಕುಮಾರ್ ಮಣಿಬಾಂಢ ಮತ್ತಿತರರು ಭಾಗವಹಿಸಿದ್ದರು.

0 ಕಾಮೆಂಟ್‌ಗಳು