ಕೊಕ್ಕಡ :ಜು,15.ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಮಲ್ಲಿಗೆ ಮಜಲು ಎಂಬಲ್ಲಿ ರಸ್ತೆಯ ಬದಿಯಿರುವ ಸತ್ತು ಬಿದ್ದಿರುವ ದನದ ಕರುವೊಂದು ಕಂಡುಬಂದಿದ್ದು.ಕೊಕ್ಕಡ ಪಿ. ಡಿ. ಒ ನೀಡಿದ ಮಾಹಿತಿಯಂತೆ ಹಿಂದೂ ಜಾಗರಣಾ ವೇದಿಕೆ -ಛತ್ರಪತಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡದ ಯುವಕರು ಮೋರಿಯಿಂದ ಕರುವನ್ನು ತೆಗೆದು ಅಂತ್ಯ ಸಂಸ್ಕಾರ ಮಾಡಿದರು.
ಕರು ಸತ್ತು ಮೂರು ದಿನಗಳಾಗಿರ ಬಹುದು ಉದ್ದೇಶ ಪೂರ್ವಕವಾಗಿ ಅದನ್ನು ಸಾಯಿಸಿರಬಹುದು ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.


ಈ ಹಿಂದೆ ಈ ಪ್ರದೇಶದಲ್ಲಿ ಹಲವು ದನಗಳು ಕಳವಾಗಿದ್ದರೂ ಕಳವಾದ ದನಗಳಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ . ಈ ಭಾಗದಲ್ಲಿ ಕಸಾಯಿಖಾನೆಗಳಿವೆ ಎಂದು, ಇಲ್ಲಿ ತಂದಿರುವ ದನದ ಕರು ಸತ್ತಿರ ಬಹುದೇ? ಎಂದು ಸಾರ್ವಜನಿಕರಲ್ಲಿ ಚರ್ಚೆಗಳಾ ಗುತ್ತಿದೆ.

0 ಕಾಮೆಂಟ್ಗಳು